ಐಸುರ ಮೋರುಮ ದಸರೆಕ

ಐಸುರ ಮೋರುಮ ದಸರೆಕ                  ||ಪ.||

ವಾಸುಮತಿಯು ಆಡಿದವು ಅಲಾವಿಯ
ಮಹಾಶಕ್ತಿ ಪೂಜಿಸ್ಯಾಡುತ                  ||ಅ.ಪ||

ಜಾರತ ಕರ್ಮದ ವಾರಕ್ಕ
ಸಾರುತಿಹುದು ಸರ್ವರಿಗೆ ವಿಲಾಸದಿ
ಮೂರು ತಾರಕಿ ಕಿರಣದೊಳಗೆ                ||೧||

ಭಾರತ ಪುರಾಣ ಪಸರಕ್ಕೆ
ಪಾರಾದಿತು ಪರತೋಷ ಕತ್ತಲದಿನ
ಪೀರ ಪೈಗಂಬರ ಮಾರನೋಮಿ           ||೨||

ಹೀಗಾಯ್ತೋ ಕರ್ಬಲ ಸರಸಕ್ಕ
ಆಗ ಮೋದಲು ನೋಡುವದು ಕಿತಾಬದಿ
ಶೀಗಿಹುಣ್ಣಿವಿಗಿದು ಶೀಘ್ರದಿಂದ             ||೩||

ಬನ್ನಿಯ ಗಿಡದೊಳು ರನ್ನದಿ
ತನ್ನ ಶರಗಳಿಟ್ಟಂಥ ಧನಂಜಯ
ಮನ್ನಿಸಿ ಯಮನಾ ತೀರದೊಳಗೆ           ||೪||

ಹದಿನೆಂಟು ಜಾತಿಯ ಸದನಕ್ಕ
ನಜರಿಟ್ಟು ನಿಜ ಜ್ಞಾನದಿ ನೋಡಿಕೋ
ಕದನಹಚ್ಚಿ ಕಡಿದಾಡುವದಿದು           ||೫||

ಕಾತೂನರಾತ್ಮ ಜನಿಸರಕ್ಕ
ಭೂತಳದಲಿ ಶಿಶುನಾಳ ಶಾಹಿರತ್
ನೀ ತಿಳಿ ಕವಿತಾನಂದ ಕಲಿಗೆ           ||೬||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊನ್ನ ಹುಡುಗಿ
Next post ಬದುಕ ಪಯಣದಲ್ಲೊಂದು ಆಕಸ್ಮಿಕ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys